ಶ್ರೇಷ್ಠ ಕನಿಷ್ಠ ಪ್ರಶ್ನೆಯೇ… ಅಸಂಗತ

ಕ್ಯಾತೆ ತೆಗೆದಿತ್ತು
ಜೀವನ ಸಾವ ಜೊತೆಗೆ
ಶ್ರೇಷ್ಠರಾರು ? ಪ್ರಶ್ನೆಯೆತ್ತಿಕೊಂಡು
ತುಸು ಗಂಭೀರವಾಗಿಯೇ !

ಜೀವನ, ನಾನು ಮೊದಲು !
ಜೀವ-ಜೀವಕ್ಕೆ, ಜಡ-ಜಡಕ್ಕೆ, ಕಾಲ-ಕಾಲಕ್ಕೆ
ಭಿನ್ನ! ಭಿನ್ನ! ರಂಗು! ರಂಗು!
ಬೆಳಕು; ಸಂತಸ.

ಕರುಣಿಸುವೆನು
ಅಂಗಳದಿ ಸೋಲು, ಗೆಲುವು, ಸಮಾಧಾನ;
ತಮ್ಮ, ತಮ್ಮ ಗುಣಾವಗುಣ,
ಅಭಿರುಚಿ, ಅನುಕೂಲ, ಶಕ್ತಿ, ದೌರ್ಬಲ್ಯಗಳಿಗೆ ತಕ್ಕಂತೆ.

ತುಡಿಸುವೆನು
ನನ್ನ ಪಂದ್ಯದಲಿರಲು
ಎಲ್ಲವನು ಎಲ್ಲರನು ಸದಾ!
ಜೀವಂತಿಕೆಯೇ ನನ್ನ ಹೂರಣ.

ಮಾಡುವೆನು ಅದಲು, ಬದಲು
ನಿಧಾನವಾಗಿ, ವೇಗವಾಗಿ, ಬೇಕಾದ ಹಾಗೆ!
ನೆಚ್ಚದಂತೆ.
ನಿಲ್ಲಿಸೆನು ಯಾವುದನೂ ಒಂದೇ ಸ್ತರದಲಿ
ಕೆಲ, ಕೆಲವರನು ಬಿಟ್ಟು,

ನಾನು ವಿಕ್ಷಿಪ್ತನಲ್ಲ!
ಹುಟ್ಟಿ ಬರುವ ಎಲ್ಲಕ್ಕೂ ಎಲ್ಲರಿಗೂ ಸಲ್ಲುವೆನು
ನನ್ನಲ್ಲಿ ಅರಳಿ ಬೆಳೆದವರು ಸಾವ ಗೆಲುವರು
ಉಳಿಯುವರು; ಬೆಳಗುವರು
ಚರಿತ್ರೆಯಲಿ ಚಿರಕಾಲ.

ನಾನು ಸಾವು,
ಭಯ! ನೋವು! ಕತ್ತಲು! ಮೌನ!
ಸತ್ಯ! ಸಾರ್ವತ್ರಿಕ! ಬಿಡುಗಡೆ!!

ನನಗೆ ಸ್ವಾಗತವಿಲ್ಲ; ಆರಾಧನೆಯಿಲ್ಲ
ಯಾರೂ… ತಾವೇ ಬಂದು ಬೀಳರು
ನನ್ನ ಮಡಿಲಿಗೆ
ಬಹಳ ಬದುಕಲರಿಯದವರು; ಧೀರರು ವಿನಃ.

ಶರಣು!
ಸತ್ತು ಬದುಕುವ ಗೆದ್ದವರಿಗೆ
ನಾನು, ಈಗ… ಆಗ… ಯಾವಾಗ ಬೇಕಾದರೂ…
ಯಾವರೂಪದಲ್ಲಾದರೂ…
ಬಂದೆರಗಬಹುದು; ಮುಗಿಸಬಹುದು.
ಸತ್ಯವಿದನು ತಿಳಿದೂ… ತಿಳಿದೂ
ಏನು ನಿಲ್ಲಿಸದೆ ಎಲ್ಲವನು ಮಾಮೂಲಾಗಿ
ಮುಂದುವರಿಸುವ
ಜೀವ ವಿಶೇಷರಿಗೆ.

ಹುಟ್ಹುಟ್ಟಿ ಬರುವ
ಜೀವದಲೆ ಎಲೆಗಳು ಬಾಳಿ
ಹಣ್ಣಾಗಿ ಉದುರಬೇಕು
ಚಿಗುರಾಗಿ ಮೂಡಬೇಕು; ಬೆಳೆಯಬೇಕು
ಬಾಳೆಂಬ ತೇರು ತರು ಹೊಸ ಹೊಸದಾಗಿ
ಸಿಂಗಾರಗೊಳಬೇಕು
ಅರ್ಥಪೂರ್ಣವಾಗಬೇಕು.

ಇದು ನ್ಯಾಯ! ಸರ್ವ ಸಮ್ಮತ !
ಜಗದಲಿ ಶ್ರೇಷ್ಠ, ಕನಿಷ್ಠ ಪ್ರಶ್ನೆಯೇ ಅಸಂಗತ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಚೆಲುವಿನ ನಾಡು ಕರುನಾಡು
Next post ಮುತ್ತಿಗೆ

ಸಣ್ಣ ಕತೆ

  • ಅಹಮ್ ಬ್ರಹ್ಮಾಸ್ಮಿ

    ಬಹುಶಃ ಮೊದಲ ಬಾರಿ ನಾನು ಅವನನ್ನು ನೋಡುತ್ತಿರಬೇಕು. ಅವನು ಅಕಸ್ಮತ್ತಾಗಿ ನನ್ನ ಕಣ್ಣಿಗೆ ಬಿದ್ದನೋ, ಅಲ್ಲಾ ಅವನೇ ನಾನು ಕಾಣುವ ಹಾಗೆ ಎದುರಿಗೆ ಬಂದನೋ ಎಂಬ ವಿಷಯದಲ್ಲಿ… Read more…

  • ಮನೆ “ಮಗಳು” ಗರ್ಭಿಣಿಯಾದಾಗ

    ಮನೆ ಮಗಳು "ಸೋನಿ" ಉಡಿ ತುಂಬುವ ಸಮಾರಂಭ. ಬೆಳಗಾವಿ ಜಿಲ್ಲೆಯ ಸದಲಗಾ ಪಟ್ಟಣದ ಪೀರ ಗೌಡಾ ಪಾಟೀಲ ಹಾಗೂ ಅವರ ತಮ್ಮ ಮಹದೇವ ಪಾಟೀಲರಿಗೆ ಎಲ್ಲಿಲ್ಲದ ಸಂಭ್ರಮವಾಯಿತು.… Read more…

  • ಆ ರಾತ್ರಿ

    ಆ ದಿನ ಮಧ್ಯಾಹ್ನ ವಸಂತನ ಮನೆಯಲ್ಲಿ ಬಹಳ ಗಡಿಬಿಡಿ! ವಸಂತ ತಾನು ಕೂಡುವ ಕೋಣೆಯನ್ನು ಅತ್ಯಂತ ಶಿಸ್ತಿನಿಂದ ಇಡುವ ಕಾರ್ಯದಲ್ಲಿ ಮಗ್ನನಾಗಿದ್ದನು. ಗಡಿಯಾರದ ಮುಳ್ಳುಗಳು ಎರಡು ಗಂಟೆಯಾದುದನ್ನು… Read more…

  • ನಿರಾಳ

    ಮಂಗಳೂರಿನ ಟೌನ್‌ಹಾಲಿನ ಪಕ್ಕದಲ್ಲಿರುವ ನೆಹರೂ ಮೈದಾನಿನ ಮೂಲೆಯ ಕಲ್ಲು ಬೆಂಚಿನ ಮೇಲೆ ಕುಳಿತ ಪುರಂದರ ಹಸಿವೆಯನ್ನು ತಡೆಯಲಾರದೆ ತಳಮಳಿಸುತ್ತಿದ್ದ. ಜೇಬಿಗೆ ಕೈ ಹಾಕಿ ನೋಡಿದ. ಬರೇ ಇಪ್ಪತ್ತೇಳು… Read more…

  • ಕರಿ ನಾಗರಗಳು

    ಚಿತ್ರ: ಆಂಬರ್‍ ಕ್ಲೇ ಇಶಾಂ ನಮಾಜಿಗೆ (ರಾತ್ರೆಯ ನಮಾಜು) ಮೊದಲು ಅರಬ್ಬಿ ಪುಸ್ತಕವನ್ನು ಬ್ಯಾಗಿನೊಳಗಿಟ್ಟುಕೊಂಡು, ಅದನ್ನು ದುಪಟ್ಟದೊಳಗೆ ಮರೆ ಮಾಡಿಕೊಂಡು ಓಡಿ ಬಂದ, ತರನ್ನುಮ್‌ ನೀರು ಹರಿಯುತ್ತಿದ್ದ… Read more…

cheap jordans|wholesale air max|wholesale jordans|wholesale jewelry|wholesale jerseys